ಬೆಳಗ್ಗೆ ನನ್ನ ಗೆಳೆಯ ಚಂದನ್ (ಕನ್ನಡದ ಸೈನಿಕ. ) ತನ್ನ facebook ನಲ್ಲಿ ರಾಜರತ್ನಂ ರವರ ಕವನದ ಸಾಲುಗಳುಳ್ಳ ಈ ಚಿತ್ರವನ್ನ ಬಳಸಿ "ಹೆಂಗೆ ನಾವು" ಅನ್ನೋ ಪ್ರೆಶ್ನೆ ಇಟ್ಟಿದ್ದ .. :) ಅದಕ್ಕ್ ನನಗನ್ಸಿದ ಎರಡು ಪದಗಳ ಕಾಮೆಂಟ್ ಬರೆದೆ.
ರಾಜರತ್ನಂ ರವರು ಪ್ರತಿ ಒಬ್ಬ ಕನ್ನಡಿಗನಿಗೆ ಚಿರ ಪರಿಚಿತರು . ಯುವ ಪೀಳಿಗೆಗೆ ಇವರ ರತ್ನನ ಪದಗಳ ಘಮಲು ಬಲು ಸುಲಭವಾಗ್ ಹತ್ತುತ್ತೆ. ಕಾರಣ ಅ ಸಮಯದಲ್ಲಿ ಏರ್ಪಡಾಗೋ ಸುಖ ಸುಮ್ಮನೆ connectivity.
ಪ್ರಾಯಶಃ ನಾವ್ ಹುಟ್ಟಕ್ ಮುಂಚೆ ಈ ಲೋಕದ ಯಾತ್ರೆ ಮುಗಿಸಿದ್ದ ರಾಜರತ್ನಂ ಅವರು ಇಂದಿಗೂ ನಮ್ಮ ಜೀವನದ ಹಲವು ಮಜಲುಗಳಲ್ಲಿ ಬದುಕಿದ್ದರೆ ಅನ್ನೋದು ಸತ್ಯ. ನನ್ನ ಬಾಲ್ಯದ ಕನ್ನಡ ಪದ್ಯಗಳೇ , ನನ್ನ ಮಗನ ಕನ್ನಡ ಪದ್ಯಗಳು .(ನಾಯಿ ಮರಿ ನಾಯಿ ಮರಿ ತಿಂಡಿ, ನಮ್ಮ ಮನೆಯಲೊಂದು ಪುಟ್ಟ ಪಾಪ.. ). ಇದರ ಕತೃ ಸಾಕ್ಷಾತ್ ರಾಜರತ್ನಂ ಅನ್ನೋ ಸತ್ಯ ಹಲವರಿಗೆ ಗೊತ್ತಿರಲಾರದು.
ಅವರ ಬೆಳದಿಂಗಳ ರಾತ್ರಿಲಿ, ಪುಟ್ನಂಜಿ, ಬ್ರಹ್ಮ ನಿ೦ಗೆ ಜೋಡಿಸ್ತಿನಿ , ಕೇಳಿರದ ಕನ್ನಡ ಬಲ್ಲವರು ಇರಲಾರರು ..
ಇವರ ಪದ್ಯಗಳನ್ನ ಹಾಡುಗಳನ್ನಾಗಿಸಿದ ನಮ್ಮ ಸಂಗೀತಗಾರರಿಗೆ ಮುಖ್ಯವಾಗಿ ಮೈಸೂರು ಅನಂತಸ್ವಾಮಿಯವರಿಗೆ, ಬಿ.ಕೆ. ಸುಮಿತ್ರಮ್ಮ ನವರಿಗೆ ವಂದನೆಗಳು. ಮಕ್ಕಳ ಪದ್ಯಗಳ ಸರಳತೆಯಿಂದ, ರತ್ನನ್ ಪದಗಳೋಳಗಿರೋ, ಜೀವನದ ಅನನ್ಯ ಸೂಕ್ಷಮತೆ ಹಾಗೂ ಕನ್ನಡದ ಅಭಿಮಾನವನ್ನ ಉಣಬಡಿಸಿರುವ ನಿಮಗೆ ಕೋಟಿ ಕೋಟಿ ನಮನಗಳು.
ಇವರ ಪದ್ಯಗಳನ್ನ ಹಾಡುಗಳನ್ನಾಗಿಸಿದ ನಮ್ಮ ಸಂಗೀತಗಾರರಿಗೆ ಮುಖ್ಯವಾಗಿ ಮೈಸೂರು ಅನಂತಸ್ವಾಮಿಯವರಿಗೆ, ಬಿ.ಕೆ. ಸುಮಿತ್ರಮ್ಮ ನವರಿಗೆ ವಂದನೆಗಳು. ಮಕ್ಕಳ ಪದ್ಯಗಳ ಸರಳತೆಯಿಂದ, ರತ್ನನ್ ಪದಗಳೋಳಗಿರೋ, ಜೀವನದ ಅನನ್ಯ ಸೂಕ್ಷಮತೆ ಹಾಗೂ ಕನ್ನಡದ ಅಭಿಮಾನವನ್ನ ಉಣಬಡಿಸಿರುವ ನಿಮಗೆ ಕೋಟಿ ಕೋಟಿ ನಮನಗಳು.
ಅರುಣ್ (ಆಚರಾ)