ಸೋಮವಾರ, ಅಕ್ಟೋಬರ್ 31, 2011

ಅಭಯ ಕರ್ನಾಟ!

ನನ್ನ ನಲ್ಮೆಯ ಗೆಳೆಯರೆಲ್ಲರಿಗೂ ೨೦೧೧ರ "ಕನ್ನಡ ರಾಜ್ಯೋತ್ಸವದ ಶುಭಾಷಯಗಳು".
ನವೆಂಬರ್ ತಿಂಗಳು ಕನ್ನಡದ ಹಬ್ಬ. ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ದುಡಿದವರ ನೆನೆಯುವ, ದುಡಿವವರ ಹುರಿದುಂಬಿಸುವ, ಭಾಷಾಭಿಮಾನ ಮತ್ತು ನಾಡಿನ ಅಭಿಮಾನ ವೃದ್ಧಿಸುವ ಕೈಂಕರ್ಯ ಈ ಹಬ್ಬದ ವಿಶೇಷ.

ಇದೇ ಸಂದರ್ಭದಲ್ಲಿ ನನ್ನ ಹಲವು ದಿನಗಳ ಆಸೆ, ಕೊನೆಗೂ ’ಬ್ಲಾಗ್’ ಮಾಡಲೇಬೇಕೆಂಬ ನಿರ್ಧಾರ!!!. ಕನ್ನಡದ ಬಗೆಗಿನ ಸಹಜ ಅಭಿಮಾನ, ನಾಡಿನ ಮೇಲೆ ಹುಟ್ಟಿನಿಂದ ಬಂದ ಪ್ರೀತಿ, ಹಿಂದೆ ಬರೆದ ಹಲವು ಕವನಗಳ ಅನುಭವ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಡು , ನಾಟಕ ,ಕಿರು ನಾಟಕಗಳಿಗೆ ಸಂಭಾಷಣೆ ಬರೆಯುತ್ತಿದ್ದ ಅನುಭವ, ನನ್ನನ್ನು ಈ ಕಾರ್ಯಕ್ಕೆ ಹುರಿದುಂಬಿಸಿದ ನನ್ನ ಗೆಳೆಯರು, ನನ್ನ ಕೈ ಹಿಡಿಯಬಹುದು ಅನ್ನೋ ನಂಬಿಕೆ :) ....

ಶೀರ್ಷಿಕೆಯ ಬಗ್ಗೆ ಯೋಚಿಸುವಾಗ, ಹಲವು ಹೆಸರುಗಳು ಮಿಂಚಿದವು. ಅನುಭವವನ್ನ, ಅನಿಸಿಕೆ, ಭಾವನೆ, ರಾಜ್ಯ ಭಾಷೆ, ನನ್ನ ಕನ್ನಡ, ಹಳೆಯ ಕವನ , ....... ... ಇನ್ನು ಹಲವು ... ..ಇವಲ್ಲೆವನ್ನು ಹಂಚಿಕೊಳ್ಳೋ ತವಕ. ಅದರೆ ಎಲ್ಲವೂ ಸರಳವಾಗಿ !!

ತರ್ಕವಿತ್ತು ಯೋಚಿಸಿದೆ. ನಾನು ನಾನಾಗಿ, ಎನ್ನನ್ನ ಸರಳವಾಗಿ ಬರೆಯಬಲ್ಲೆ ಎಂದು ಪ್ರಶ್ನಿಸಿಕೊಂಡಾಗ ಹೊಳೆದ ಎರಡು ವಿಷಯಗಳು,
೧ . ನನ್ನ ನಾಡು ನುಡಿ
೨. ನನ್ನ ಮಗ 'ಅಭಯ' ನ ಹೆಸರು
ಗೊತ್ತಿಲ್ಲದೆ ಕುಮಾರ ವ್ಯಾಸನ 'ಕರ್ನಾಟ ಭಾರತ ಕಥಾ ಮಂಜರಿ' ಶೀರ್ಷಿಕೆ ಸ್ಪೂರ್ತಿಯಾಯ್ತು .
ನಮ್ಮ ಇಂದಿನ ಕರ್ನಾಟಕ ಅಂದು ವಿಜಯನಗರ ಕಾಲದ ಕರ್ನಾಟ ರಾಜ್ಯ.. !!! ಒಮ್ಮೆ ಹೃದಯ ತುಂಬಿದ ಹೆಮ್ಮೆ !

ಬ್ಲಾಗುಗಳನ್ನ "ಅಭಯ ಕರ್ನಾಟ" ದ ಶೀರ್ಷಿಕೆ ಅಡಿಯಲ್ಲಿ ಇನ್ನು ಕನಿಷ್ಠ ಎರಡು ವಾರಕ್ಕೊಮ್ಮೆ ಬರೆಯಲೆ ಬೇಕು ಎಂದು ನಿರ್ಧರಿಸಿ ಈ ಸಾಹಿತ್ಯ ಪ್ರಾಕಾರದ (ಬ್ಲಾಗ್) ಪ್ರಪಂಚಕ್ಕೆ ಅಂಬೆ ಗಾಲಿಡುತಿದ್ದೇನೆ . ನಿಮ್ಮ ಸಹಕಾರ ಜೊತೆಗಿರಲಿ .. ತಪ್ಪಾದಲ್ಲಿ ತಿದ್ದಿ ನೆಡಸಿ.

ನನ್ನೆಲ್ಲ ಗೆಳೆಯರಿಗೆ ಮತ್ತೊಮ್ಮೆ "ಕನ್ನಡ ರಾಜ್ಯೋತ್ಸವದ ಶುಭಾಷಯಗಳು". ಕರ್ನಾಟಕಕ್ಕೆ ಈ ವರುಷ ಒಳಿತಾಗಲಿ... ಕನ್ನಡಿಗರೆಲ್ಲರೂ ಈ ವರುಷ ಹರ್ಷ ತರಲಿ..!!

ನಿಮ್ಮ ಅರುಣ್ ( ಆಚರಾ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ